Friday 9 December 2016

ಗಾಂಧಿ ಹತ್ಯೆ ಮತ್ತು ಗೋಡ್ಸೆ


ರವಿ ಬೆಳಗೆರೆ ಅವರ "ಗಾಂಧಿ ಹತ್ಯೆ ಮತ್ತು ಗೋಡ್ಸೆ" ಪುಸ್ತಕದ ಬಗ್ಗೆ ಏನೇ ಬರೆಯಲು ಮನಸು ಹಿಂಜರಿಯುತ್ತದೆ ಕಾರಣ ನಾವು ಗಾಂಧಿ ಮತ್ತು ಗೋಡ್ಸೆ ಅವರ ಬಗ್ಗೆ ಇರುವ ಎಷ್ಟೋ ಭಾವನೆಗಳ ಮೇಲೆ ಇದು ಸಂಚಲನ ಮೂಡಿಸುತ್ತದೆ.

ನಾವು ಗಾಂಧೀಜಿ ಅವರ ಬಗ್ಗೆ ನಂಬಿಕೊಂಡಿರುವ ಎಷ್ಟೋ ವಿಚಾರಗಳು ಒಂದೊಂದು ಕಡೆ ಸುಳ್ಳು ಎಣಿಸುವುದು ಎಷ್ಟು ನಿಜವೋ ಖಳನಾಯಕನೆಂದೇ ಭಾವಿಸುವ ಗೋಡ್ಸೆ ಬಗ್ಗೆ ಕೆಲವೊಂದು ಕಡೆ ಗೌರವ ಮೂಡಿಸುವುದು ಸತ್ಯ. ಹಾಗಾಗಿ ಈ ಪುಸ್ತಕದ ಬಗ್ಗೆ ಹೆಚ್ಚು ಬರೆಯದೆ ಎಲ್ಲರೂ ಇದನ್ನು ಓದಿನೆ ತಿಳಿಯಲಿ ಎನ್ನುವುದು ನನ್ನ ಅಭಿಪ್ರಾಯ.

ಜೊತೆಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹತ್ಯೆಯ ಕುರಿತಾದ ರೋಚಕ ಕಥೆಯನ್ನು (ನೈಜತೆ) ರವಿ ಬೆಳಗೆರೆಯವರು "ರಾಜ ಬೇಟೆ" ಮತ್ತು "ಇಂದಿರಾ ವಧೆ" ಎಂಬ ಎರಡು ಅಧ್ಯಾಯಗಳಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಒಟ್ಟಾಗಿ ಹೇಳುವುದಾದರೆ ಇದೊಂದು ತನಿಖೆ ಆಧಾರಿತ ಪ್ರತೀ ಪುಟವೂ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಪುಸ್ತಕ. ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು.

ಕನ್ನಡ ಕಾದಂಬರಿ ಕೂಟಕ್ಕೆ ಮತ್ತೊಮ್ಮೆ ಧನ್ಯವಾದಗಳು.

No comments: