Friday 2 December 2016

ಶಾಂತಲಾ







ಕೆ.ವಿ ಅಯ್ಯರ್ ಅವರ "ಶಾಂತಲಾ" ಹೆಸರಿನಷ್ಟೇ ಸುಂದರ. ಈ ಕೃತಿ ಓದಿದ ಪ್ರತಿಯೊಬ್ಬರೂ ಹೇಳಿರುವುದು ಬೇಲೂರು ಹಳೇಬೀಡು ನೋಡಬೇಕಂದು ನಾನು ಇದಕ್ಕೆ ಹೊರತಲ್ಲ. ಇಲ್ಲಿ ಪ್ರತಿಯೊಂದು ಸಂಬಂಧಗಳ ಸುಂದರ ಚಿತ್ರಣವಿದೆ. ನನಗೆ ಈ ಪುಸ್ತಕ ಓದಿದ್ದಾಗಿನಿಂದ ಅಲ್ಲಿ ಚಿತ್ರಿತವಾಗಲಿರುವ ಹೊಯ್ಸಳೇಶ್ವರ-ಶಾಂತಲೇಶ್ವರ ತುಂಬಾ ಕಾಡುತ್ತಿದೆ ಎಂದು ನೋಡುವೆನೋ ಅನಿಸುತ್ತಿದೆ. ಈಗಾಗಲೇ ಶಾಂತಲಾ ಓದಿದ ಪ್ರತಿಯೊಬ್ಬರೂ ಕೂಟದಲ್ಲಿ ಒಳ್ಳೆಯ ವಿಮರ್ಶೆಗಳನ್ನು ಬರೆದಿರುವುದರಿಂದ ನಾನು ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ ಎಂದು ಭಾವಿಸುತ್ತೇನೆ.
ಇಲ್ಲಿ ನಾ ಕಂಡ ಅಂಶಗಳೆಂದರೆ ವಿಷ್ಣುವರ್ಧನ ಆಳ್ವಿಕೆಯ ವೀರಜೀವನ, ರಾಜಮಾತೆ ರಾಜಪತ್ನಿಯರ ಜೀವನದ ಸಂಕಟ,ಸುಖ ದುಃಖ, ತಾಯಿ ಮಕ್ಕಳ, ರಾಜ ಮಂತ್ರಿ, ಇತ್ಯಾದಿ ಸಂಬಂಧಗಳ ಸೊಗಸು ಅಮೋಘವಾಗಿ ಚಿತ್ರಿತವಾಗಿದೆ. ಸಾಧ್ಯವಾದಷ್ಟು ಬೇಗ ಶಾಂತಲದಲ್ಲಿ ಬಂದಿರುವ ಅಷ್ಟು ಸ್ಥಲಗಳಿಗೆ ಹೋಗಿಬರುವೆ. ಶಾಂತಲೆಯ ಬಗ್ಗೆ ವಿಮರ್ಶೆಯ ಬದಲು ಒಂದು ಕವನದ ರೂಪದಲ್ಲಿ ಬರೆಯಲು ಪ್ರಯತ್ನಿಸದ್ದೇನೆ.
ನಾಟ್ಯಸರಸ್ವತಿ ಶಾಂತಲೆ ನೀನೆಷ್ಟು ಕೋಮಲೆ
ಅಂದದಲ್ಲಿ ಅಪ್ಸರೆ ಗುಣದಲ್ಲಿ ಶಾರದೆ
ನಿನ್ನ ಓದಿದ ನನ್ನ ಮನತುಂಬಾ ಕಾಡುತಿದೆ ನಿನ್ನ ಕಲೆ
ಕಾದಿರುವೆ ನೋಡಲು ನಿನ್ನ ಸೌಂದರ್ಯದ ಸೆಲೆ
ಬೇಗನೆ ಕರೆಸಿಕೋ ಸುಂದರ ಶಿಲೆಗಳ ನಾಡಿಗೆ

No comments: