Friday 2 December 2016

ಇಕ್ಷ್ವಾಕು ಕುಲತಿಲಕ







ಅಮೀಶ್ ಅವರ ರಾಮಚಂದ್ರ ಸರಣಿ - ೧ "ಇಕ್ಷ್ವಾಕು ಕುಲತಿಲಕ" (ಕನ್ನಡಕ್ಕೆ ಅನುವಾದ: ಬಿ ಕೆ ಎಸ್ ಮೂರ್ತಿ) ಕೃತಿಯಲ್ಲಿರುವುದು ರಾಮಾಯಣದ ನಾಯಕ ಶ್ರೀ ರಾಮನ ಕಥೆ.
ಯಾರು ಸಂಪೂರ್ಣ ರಾಮಾಯಣ ಓದಿಲ್ಲವೋ ಅವರಿಗೆ ಇದು ಹೊಸದೆನಿಸಬಹುದು. ಇಲ್ಲಿನ ಮುಖ್ಯ ಅಂಶಗಳೆಂದರೆ ಬಾಲ್ಯದಿಂದಲೇ ಅಪ್ಪನಿಂದ ಮತ್ತು ಇತರರಿಂದ ತಿರಸ್ಕರಿಸಲ್ಪಟ್ಟ ರಾಮ, ಆತನ ಮೇಲೆ ಬಂದ ಅಪವಾದಗಳಿಂದ ಹೊರಬಂದನೇ? ಪ್ರಿಯ ಪತ್ನಿ ಸೀತೆಯ ಮೇಲಿನ ಪ್ರೇಮ ಅವನ ಹೋರಾಟದ ಮೂಲಕ ಸ್ಥಿರವಾಗಿತ್ತೇ? ರಾವಣನಿಂದ ತನ್ನ ಬಾಲ್ಯದಲ್ಲಿ ಸಿಗಬೇಕಾದ್ದನ್ನೆಲ್ಲವನ್ನು ಕಳೆದುಕೊಂಡ ರಾಮ ಅವನನ್ನು ಸೋಲಿಸಿದನೇ? ಇವೆಲ್ಲುವುಗಳ ಉತ್ತರ ಈ ಪುಸ್ತಕದಲ್ಲಿ ದೊರೆಯುತ್ತದೆ.
ವಯಕ್ತಿಕ ಅಭಿಪ್ರಾಯ ಹೇಳಬೇಕಂದರೆ ಅಮೀಶ್ ಅವರ ಶಿವಸರಣಿಗಳಿಗೆ ಹೋಲಿಸಿದರೆ ಈ ಪುಸ್ತಕದಲ್ಲಿ ಅಷ್ಟು ಸ್ವಾರಸ್ಯ ಮತ್ತು ರೋಚಕತೆಯ ಅನುಭವ ನನಗಾಗಲಿಲ್ಲ. ಹಾಗಂತ ಇಲ್ಲಿ ಯಾವುದು ನೀರಸವೂ ಅನಿಸುವುದಿಲ್ಲ. ಯಾರು ಸಂಪೂರ್ಣ ರಾಮಾಯಣ ಓದಿಲ್ಲವೋ ಅವರಿಗೆ ಖಂಡಿತ ಇದರಿಂದ ರಾಮಾಯಣದ ಜ್ಞಾನ ದೊರೆಯುತ್ತದೆ ಎನ್ನುವುದು ನನ್ನ ಭಾವನೆ.

No comments: