Thursday 27 August 2015

ನನ್ನ ಮನಸೊಂದು ತಿಳಿನೀರ ಕೊಳವು 
ಅಲ್ಲಿ ಹರಿಯುತ್ತಿದೆ ಪರಿಶುದ್ಧ ಪ್ರೇಮವೂ 
ಬಯಸುತಿದೆ ನಿನ್ನ ಮನಸಿನ ಸಂಗಮವೂ 
ಕೊಳದಲ್ಲಿ ಚಂದ್ರನ ಬಿಂಬವ ಕಾಣಲು 
ನೈದಿಲೆಯ ನಯನವು ಪರಿತಪಿಸುವ ಹಾಗೇ 
ನನ್ನ ಪ್ರೀತಿಯ ಬಳ್ಳಿಗೆ ನಿನ್ನ ಮನಸಿನ 
ಸಂಗಮವೇ ಆಸರೆಯೆಂದು ಕಾಯುತಿರುವೆ 


Thursday 6 August 2015

ರೈತನಿಗೂ ಸಾಕಾಗಿದೆ ಬರಗಾಲದ ನೋವು 
ಬೆಳೆಗಳಿಗೆಲ್ಲ ತಾಕುತ್ತಿದೆ ಬಿಸಿಲಿನ ಖಾವು 
ಬೇಕಾಗಿದೆ ನಮಗೆಲ್ಲ ವರುಣನ  ಕರುಣೆಯು 
ಭೂತಾಯಿಯ ಕರುಳ ತಂಪಾಗಿಸಲು 
ಓ ಮಳೆರಾಯ ನಿನಗೊಂದು ಪ್ರಾರ್ಥನೆ 
ನಿನ್ನ ಕೋಪದಿಂದ ಸುಡಬೇಡ ನಮ್ಮ ರೈತರ ಬೆಳೆ 
ಅತೀಯಾಗಿಯೂ ಸುರಿಯದೇ ಬರಿಯ ಹನಿಗಳನ್ನೂ ಉದುರಿಸದೆ 
ಮಿತವಾಗಿ ಸುರಿದು ಬದುಕಿಸು ಬೆಳೆಯ ಚಿಗುರ 
ಪ್ರೀತಿ ಕರುಣೆ ವಾತ್ಸಲ್ಯದಿಂದ ವರೆಸು ರೈತರ ಕಣ್ಣೀರ 

Monday 3 August 2015

ಮಾತಾಡದ ಮೌನಕ್ಕೆ ಇಂದೇಕೋ ಶರಣಾಗಿರುವೆ 
ಸಿಗಲಾರದ ಶಬ್ಧಕ್ಕೆ ಹುಡುಕಾಡಿ ಸೋತಿರುವೆ 
ನೂರಾರು ಭಾವಗಳ ಪೋಣಿಸುವ ಆಸೆಯ ಕೊಂದಿರುವೆ 
ಮೌನವು ಮಾತಾಗಿ ಭಾವಗಳೆಲ್ಲ ಪದಗಳಾಗಿ 
ಹೊರಹೊಮ್ಮುವ ತನಕ ಕೊನೆವರೆಗೂ ಕಾಯುವೆ