Tuesday 29 September 2015

ಮನಸಿನ ಮಾತುಗಳೆಲ್ಲ ಮೌನದಲ್ಲೇ 
ಮರಣ ಹೊಂದುತ್ತಿವೆ 
ಕನಸಿನ ಕೂಸುಗಳೆಲ್ಲ ಕರುಳಲ್ಲೇ 
ಕೊನೆಯುಸಿರೆಳೆಯುತ್ತಿವೆ 
ಭಾವನೆಗಳಿಲ್ಲದ ಬದುಕು ಒಣಗಿದ ಜಾಲಿಯಂತಾದರೆ 
ಸಾಧನೆಗಳಿಲ್ಲದ ಬದುಕು ಶೂನ್ಯವಿದ್ದಂತೆ 
ಒಳ್ಳೆಯ ಭಾವನೆಗಳನು ಬೆಳೆಸಿ ದುಡಿಯುವ ಕೈಗಳೆಂಬ 
ದಾರದಿಂದ ಸಾಧನೆಗಳೆಂಬ ಹೂಗಳನು ಪೋಣಿಸಿದರೆ 
ಕಂಗೊಳಿಸುವುದು ಬದುಕು ಆಗ ಸುಂದರ ಹಾರದಂತೆ 

Sunday 27 September 2015

ಮುಖಪುಸ್ತಕದಲ್ಲಿಂದು ಡಿಜಿಟಲ್ ಇಂಡಿಯಾದೇ ಪ್ರಭಾವ 
ಎಲ್ಲಿ ನೋಡಿದರೂ ತ್ರಿವರ್ಣಗಳದೇ ರಾಜ್ಯಭಾರ 
ರಾಷ್ಟ್ರಧ್ವಜವು ಸೆರೆ ಹಿಡಿಯುತ್ತಿದೆ ಎಲ್ಲರ ಭಾವಚಿತ್ರವ 
ಕಣ್ಣೆರಡು ಸಾಲುತ್ತಿಲ್ಲ ತುಂಬಿಕೊಳ್ಳಲು ಈ ಸೌಂದರ್ಯವ 

Wednesday 23 September 2015

ಮಾತಾಡದ ಮೌನಕ್ಕಿಂದು ಕವನ 
ಬರೆಸಿಕೊಳ್ಳುವ ಆಸೆಯಾಗಿದೆಯಂತೆ 
ಏನೆಂದು ಬರೆಯಲಿ ಎಂದು ಕೇಳಿದರೆ 
ತೋಚಿದ್ದು ಗೀಚು ಎಂದು ಹೇಳುತಿದೆ 
ಮೌನಕ್ಕೆ ನೋವಿರದು ನಲಿವಿರದು 
ಅದಕಿರುವುದು ಮೂಕ ಭಾವನೆಯೊಂದೆ 
ಅದನು ಕಾಣಲು ಯಾರು ಪ್ರಯತ್ನಿಸುತ್ತಿಲ್ಲ 
ಆದರೂ ಹಠವ ಬಿಡುವುದಿಲ್ಲ 
ಹೀಗಾದರೆ ಹೇಗೆ ಬರೆಯಲಿ ನಾ ಕವನವ 
ಜೋಡಿಸಲಿ ಹೇಗೆ ಸಾಲುಗಳ 

ಪ್ರೀತಿಗೆ ದೇವರು ಎಂದರು ತಿಳಿದವರು ಆ ದೇವರ ಮಕ್ಕಳೇ ನಾವೆಲ್ಲರೂ 
ಆದರೂ ಕಿತ್ತಾಡಿ ಸಾಯುತ್ತಿರುವರು ದ್ವೇಷವೆಂಬ ಬೆಂಕಿಯಲಿ 
ಕೊಚ್ಚಿ ಹೋಗುತಿಹರು ಅಪನಂಬಿಕೆಯೆಂಬ ಸುಳಿಯಲ್ಲಿ 
ನಾಶ ಮಾಡಲಿ ದ್ವೇಷ ಸಿಟ್ಟು ದುರಾಸೆಗಳೆಂಬ ಅಸುರರ 
ನಂಬಿಕೆ ಪ್ರೀತಿ ವಿಶ್ವಾಸಗಳೆಂಬ ತ್ರಿಮೂರ್ತಿಗಳು ಒಂದಾಗಿ 
ಮತ್ತೆ ಒಂದಾಗಿ ಬಾಳೋನ  ನಾವೆಲ್ಲಾ ಪ್ರೀತಿಯ ಕಂದಮ್ಮಗಳಾಗಿ 

Tuesday 22 September 2015

ಮನಸಿಗೆ ಮರೆಯಲಾಗದ ಗಾಯ ಆದಾಗಲೇ 
ಅದನ್ನು ಶಾಶ್ವತವಾಗಿ ಅಳಿಸುವ ಔಷಧ ಸಿಗುವುದು 
ಜೀವನದ ಆಸೆ ಕನಸುಗಳೆಲ್ಲ ಸತ್ತಾಗಲೇ 
ಮನಸು ಶಾಶ್ವತ ಮೌನಕ್ಕೆ ಶರಣಾಗುವುದು 

Saturday 19 September 2015

ನೀ ಹುಟ್ಟಿದ ಕ್ಷಣದಿಂದ ನನ್ನ ಆನಂದಕ್ಕೆ ಮಿತಿಯೇ ಇಲ್ಲ 
ಮುಗ್ಧವಾದ ನಿನ್ನ ಕಂಗಳಲ್ಲಿ ಲಕ್ಷ್ಮಿಯ ನಾಟ್ಯ ಕಂಡರೆ 
ಪುಟ್ಟ ಬಾಯಿಂದ ಹೊರಬರುವ ಧ್ವನಿಯಿಂದ 
ನಾದಗಂಗೆಯೇ ಹರಿದಂತಾಗುತ್ತದೆ 
ನೀ ನಗುವ ಕ್ಷಣವೆಲ್ಲ ಬಾಲ ದೇವತೆಯೇ 
ಜೊತೆಯಿದ್ದಂತೆ  ಭಾಸವಾಗುತ್ತಿದೆ 
ಮಗಳೇ ಏನು ಪುಣ್ಯ ಮಾಡಿ ಪಡೆದೆನೋ ನಾ ನಿನ್ನ 
ನೀ ಬಳಿಯಿದ್ದ ಕ್ಷಣಗಳೆಲ್ಲ ಹೇಳುತ್ತಿವೆ ನಾ ಬಲು ಧನ್ಯ 

Tuesday 15 September 2015

ನಂಬಿ ಮೋಸ ಹೋಗದಿರು ಮನಸೇ 
ನಿನಗೆ ನೀನೆ ಎಲ್ಲ ನಿನ್ನನು ಬಿಟ್ಟರೆ ಇಲ್ಲಿ ಗತಿಯಾರಿಲ್ಲ 
ಬಾಳಿನ ಹಸಿರೆಲ್ಲ ಕಮರಿ ಹೋದಾಗ 
ಉಸಿರೇ ನೀ ನಿಲ್ಲುವೆ ಯಾವಾಗ 

Tuesday 8 September 2015

ಕಣ್ಣಿಗೆ ಕಾಣದ ಮನದಲ್ಲಿ ಬಣ್ಣ ಬಣ್ಣದ 
ಭಾವನೆಗಳ ಬಿತ್ತುವ ಪುಣ್ಯಾತ್ಮನ್ಯಾರೋ 
ಅವು ಚಿಗುರಿ ಹೂವಾಗಿ ಅರಳುವ ಸಮಯದಲ್ಲಿ 
ಕಿತ್ತು ಸಾಯಿಸಿಬಿಡು ಎಂದು 
ವಿಧಿಯ ಬರೆದ ಕೈ ಯಾವುದೋ 

Monday 7 September 2015

ನನ್ನೊಡಲಲ್ಲಿ ತುಂಬಿದೆ ಮಮತೆಯ ಮಂಜು 
ಅದೇಕೋ ಕರಗುತಿದೆ ಕಾರಣ ನಿಮ್ಮೆಲ್ಲರ ಸಂಚು 
ಬೇಡವೆಂದರೂ ನಿಷ್ಕರುಣೆಯಿಂದ ಕೀಳುತ್ತಿರುವಿರಿ 
ನನ್ನ ಕರುಳಿನ ಕುಡಿಗಳ ನಿಮ್ಮ ಜೀವನದ ಆಧಾರವ 
ಅವುಗಳ ಆರ್ತನಾದಗಳೇ ಹೇಳುತ್ತಿವೆ ನಿಮಗಿಲ್ಲ ಇನ್ನು ಮಳೆ ಬೆಳೆಯೂ 
ಆದರೂ ಬಾರದು ಬುದ್ಧಿಯೂ ಬರೀ ಬರಗಾಲವೇ ನಿಮಗೆ ಸಿದ್ಧಿಯೂ 
ನನ್ನ ಕರುಣೆ ಸಹನೆಯೂ ಕರಗುತ್ತಿವೆ ನಿಮ್ಮ ನೋವುಗಳು ಹೆಚ್ಚುತ್ತಿವೆ 
ಕೊಂದರೆ ನೀವು ಭೂತಾಯಿಯ ಹತ್ತುವಿರಿ ನರಕದ ಮೆಟ್ಟಿಲುಗಳ 

Friday 4 September 2015

ನಿನ್ನ ಕಣ್ಣೀರು ಜಾರುವ ಮುನ್ನ 
ಬರುವುದು ಒ0ದು ಚಿನ್ನ 
ಬಿಗಿಯಾಗಿ ಹಿಡಿದಪ್ಪಲು ನಿನ್ನ 
ಜಾರದ0ತೆ ನೋಡಿಕೊಳ್ಳುವುದು 

ನಿನ್ನ ಕ0ಬನಿಯನ್ನ...