Monday 7 September 2015

ನನ್ನೊಡಲಲ್ಲಿ ತುಂಬಿದೆ ಮಮತೆಯ ಮಂಜು 
ಅದೇಕೋ ಕರಗುತಿದೆ ಕಾರಣ ನಿಮ್ಮೆಲ್ಲರ ಸಂಚು 
ಬೇಡವೆಂದರೂ ನಿಷ್ಕರುಣೆಯಿಂದ ಕೀಳುತ್ತಿರುವಿರಿ 
ನನ್ನ ಕರುಳಿನ ಕುಡಿಗಳ ನಿಮ್ಮ ಜೀವನದ ಆಧಾರವ 
ಅವುಗಳ ಆರ್ತನಾದಗಳೇ ಹೇಳುತ್ತಿವೆ ನಿಮಗಿಲ್ಲ ಇನ್ನು ಮಳೆ ಬೆಳೆಯೂ 
ಆದರೂ ಬಾರದು ಬುದ್ಧಿಯೂ ಬರೀ ಬರಗಾಲವೇ ನಿಮಗೆ ಸಿದ್ಧಿಯೂ 
ನನ್ನ ಕರುಣೆ ಸಹನೆಯೂ ಕರಗುತ್ತಿವೆ ನಿಮ್ಮ ನೋವುಗಳು ಹೆಚ್ಚುತ್ತಿವೆ 
ಕೊಂದರೆ ನೀವು ಭೂತಾಯಿಯ ಹತ್ತುವಿರಿ ನರಕದ ಮೆಟ್ಟಿಲುಗಳ 

No comments: