Monday 24 June 2013

ಸೈನಿಕ

ಪ್ರಳಯವಾದರೂ ಸರಿಯೇ 

ಸ್ಪೋಟವಾದರೂ ಸರಿಯೇ 

ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವೆ 

ನೊಂದ ಸಂತ್ರಸ್ತರಿಗೆ ನೆರವಾಗುವೆ 

ಎಲ್ಲಾ ಆಸೆಗಳನ್ನು ಸಂಬಂಧಗಳನ್ನೂ ಬಿಟ್ಟು 

ಕೊನೆಗೆ ನಿನ್ನ ಜೀವವನ್ನು ಲೆಕ್ಕಿಸದೆ  

ನೂರಾರು ಜೀವಗಳನು ಉಳಿಸುವೆ 

ದೇಶಕ್ಕಾಗಿ ಮಡಿಯಲು ತಯಾರಿರುವ 

ನಿನ್ನ ತ್ಯಾಗಕ್ಕೆ ಏನು ಹೇಳಿದರೂ ಸಾಲುವುದಿಲ್ಲ 

ನಿನಗೆಷ್ಟು ನಮನಗಳನು ಅರ್ಪಿಸಿದರೂ 

ಕಡಿಮೆಯೇ ಓ ಸೈನಿಕ...  ಜೈ ಹಿಂದ್   

1 comment:

Badarinath Palavalli said...

ನಾಡ ಕಾಯುವ ಸನ್ಮಿತ್ರರ ಬಗ್ಗೆ ಒಳ್ಳೆಯ ಗೌರವಯುತ ಕವನ.
http://www.badari-poems.blogspot.in