Sunday 16 June 2013

ಹೀಗೊಂದು ಪುಟ್ಟ ಸಂದೇಶ

ಮನಸಿನ ವೇಗ ಗಾಳಿಗಿಂತ ಹೆಚ್ಚು 
ಗಾಳಿ ಬೀಸಿದಾಗ ಚಂದದ ಎಲೆಗಳು 
ಬೇಡದ ಧೂಳಿನ ಕಣಗಳು ಹಾರುತಾ ಬರುವುವು 
ಹಸಿರೆಲೆ ಬಂದು ಮುಖಕ್ಕೆ ಬಡಿದಾಗ ಆನಂದವಾದರೆ 
ಬೇಡದ ಧೂಳು ಕಣ್ಣಲಿ ಹೋದಾಗ ನೋವಿನ ನೀರು ಬರುವುದು 
ಮನಸು ಸ್ವಚ್ಛಂದವಾಗಿ ಹರಿಯಲು ಬಿಟ್ಟರೆ 
ಅಪರಿಮಿತ ಕನಸುಗಳು ಹರಿಯುವುವು 
ಕೈಗೆಟುಕದ ಕನಸಿಗೆ ಹೆಚ್ಚು ಆಸೆ ಪಡುವುದು 
ವಾಸ್ತವದ ಮಡಿಲಲ್ಲಿ  ತಲೆಯಿಟ್ಟು ಮಲಗದು 
ಈ ಮನಸು ಬಯಸಿದ್ದು ಸಿಗದು ಸಿಕ್ಕಿರುವುದನ್ನು ಅದು ಸ್ವೀಕರಿಸದು  
ಇರುವ ಭಾಗ್ಯವ ಬಿಟ್ಟು ಇರದುದರ ಕಡೆ ಓಡಿದರೆ 
ಆಗುವುದೇ ನಮ್ಮ ಆಶಾಗೋಪುರ ನನಸಿನ ಸೌಧ 
ಏನೇ ಆಗಲಿ ಮುಂದೆ ಸಾಗಲೇಬೇಕು ಈ ಬದುಕ ನಡೆಸಲೇಬೇಕು 
ಕಷ್ಟವೋ ಸುಖವೋ ನೋವೋ ನಲಿವೋ ಎಲ್ಲದುದರ 
ಅನುಭವ ಪಡೆದು ಸಾಗಿಸಿದರೆ ಈ ಜೀವನ ಒಂದು ನಂದನವನ 


1 comment:

Badarinath Palavalli said...

ಬದುಕಿನ ಸಾರವನ್ನು ಸಂಗ್ರಹಿಸಿಕೊಟ್ಟಿದ್ದೀರಾ :)