Friday 17 May 2013

ಮೌನ


ನೀ ಮೌನಿಯಾದರೆ ನಾ 
ಮರೆತುಬಿಡುವೆ ನನ್ನ ದನಿಯ 
ಕೊಲ್ಲದಿರು ನೀ ನನ್ನ ಮೌನದಲಿ 
ಕೋಪವಿದ್ದರೆ ಬೈದುಬಿಡು ನಿನ್ನ ದನಿಯಲ್ಲಿ

ಮೌನವಾಗಿರುವುದು ಚಂದವೆಂದು 
ತಿಳಿದು ಸುಮ್ಮನಿದ್ದೆ ನಾ ಅಂದು 
ಆದರೆ ಒಲವಿನ ಹುಡುಗ ಮೌನವಾದರೆ 
ಏನಾಗುವುದೆಂಬ ಅರಿವು ನನಗಾಯಿತು ಇಂದು 

ಭಾವನೆಯನ್ನೇ ಬಂಡವಾಳವನ್ನಾಗಿಸಿ 
ಬದುಕುತಿರುವೆ ನಾ ಪ್ರತಿಕ್ಷಣ 
ಎಂದಾದರೂ ಒಂದು ದಿನ ತಿಳಿಯುವೆಯ 
ನೀ ನನ್ನ ಮನಸಿನ ತಲ್ಲಣ 

ಬಳಿ ನೀ ಇದ್ದಾಗ ಹರಿಯುತ್ತಿತ್ತು 
ಚಂದದ ಪ್ರೀತಿಯ ಭಾವ 
ನೀ ದೂರಾದ ಕ್ಷಣದಿಂದ ಎಲ್ಲೇ 
ಮೀರಿ ಹರಿಯುತಿದೆ ವಿರಹದ ರಾಗ 

ಮನಬಿಚ್ಚಿ ಹೇಳುವೆ ಕಡೆಯ ಮಾತು ನಿನಗೆ 
ಈಗಲೇ ನೆನೆಪಿಸುಕೋ ನನ್ನ 
ಈ ಜಗವ ಬಿಟ್ಟು ಹೋಗುವ ಮುನ್ನ 
ನೀ ನೆನೆದರೆ ಎನ್ನ ಈ ಜೀವನ ಧನ್ಯ 

2 comments:

Badarinath Palavalli said...

ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕಾದ ವಿಚಾರ:
"ಈಗಲೇ ನೆನೆಪಿಸುಕೋ ನನ್ನ
ಈ ಜಗವ ಬಿಟ್ಟು ಹೋಗುವ ಮುನ್ನ"

ತುಂಬಾ ಒಳ್ಳೆಯ ಕವನ.

Pradeep Rao said...

"ಭಾವನೆಯನ್ನೇ ಬಂಡವಾಳವನ್ನಾಗಿಸಿ
ಬದುಕುತಿರುವೆ ನಾ ಪ್ರತಿಕ್ಷಣ "..... ಇಷ್ಟವಾಯ್ತು... ಚೆಂದದ ಕವಿತೆ!