Wednesday 4 December 2013

ವೇದನೆ

ಮರುಭೂಮಿಯಲ್ಲಿ ಮರಳ ಹೊರತು ಸಿಗುವುದೇ ಹರಳು 
ಸತ್ತ ಮನಸಲಿ ನಿರ್ಭಾವುಕ ಸ್ಥಿತಿ ಬಿಟ್ಟರೆ 
ಚಿಗುರುವುದೇ ಸಂತಸದ ಚಿಲುಮೆ 
ಆಸೆಗಳೆಲ್ಲ ಸತ್ತು ಹೋಗಿ ಮನವೆಂಬ ಹೂವು
ಮತ್ತೆಂದು ಆಕಾರ ತಾಳದ ಕಲ್ಲಂತಾಗಿದೆ
ಶಿಲ್ಪಿ ಬಂದು ಕೆತ್ತಿದರೆ ಸುಂದರ ಶಿಲೆಯಾಗಬಹುದೇನೋ ಆ ಕಲ್ಲು
ಒಡೆದು ಹೋದ ಕನ್ನಡಿಯಂತಾಗಿರುವ ಮನವು ಮಾತ್ರ
ಮತ್ತೆಂದು ಅರಳಲಾಗದು ಸುಂದರ ಹೂವಾಗಿ 

No comments: