Thursday 14 April 2016

ಅಂಬರದ ನೆಸರನೇ ಏಕೆ ಕೋಪ ಈ ಧರೆಯ ಮೇಲೆ 
ನೀ ಉದಯವಾಗಿ ಅಸ್ತಂಗತನಾಗಿ ಹೋದರೂ 
ಕೆಂಡದಂತೆ ಸುಡುತಿದೆ  ಈ ಭುವಿಯು 
ಇಡೀ ಭೂಮಂಡಲಕ್ಕೆ ಬೆಳಕು ನೀಡುವ 
ನಿನ್ನ ವಿಶಾಲ ಮನದಲ್ಲಿ ಏಕೆ ಬಂತು ಈ ಆಕ್ರೋಶ 
ಭೂ ಜೀವಿಗಳೆಲ್ಲ ದಹಿಸಿದರೆನಾ ನಿನಗೆ ಸಂತೋಷ...???
ಸುರಿಸಬೇಡ ಬೇಡ ಸೂರ್ಯದೇವ ಈ ಬೆಂಕಿಮಳೆಯ 
ತಾಳಲಾರದೇ ಸಾಯುತ್ತಿವೆ ಜೀವಿಗಳು ಆ ಜ್ವಾಲೆಯ 
ಕೈ ಮುಗಿದು ಕೇಳುತಿರುವೆ ನಾ ನಿನಗಿಂದು 
ನಿನ್ನ ಬೆಂಕಿಮಳೆಯ ನಿಲ್ಲಿಸಿ ಸುರಿಸಲು ಹೇಳು 
ವರುಣನಿಗೆ ನೀರಿನ ಮಳೆಯ ತಂಪಾಗಿಡಿಸಲು ಈ ಇಳೆಯ 
ಈ ಕೂಗು ಕೇಳಿ ಶಾಂತನಾಗಿ ನೀ ನೀಡಿದರೆ ಈ ವರವ 
ಕೊನೆವರೆಗೂ ಋಣಿಯಾಗಿರುವೆ ನಾ ನಿನಗೆ ಎಂದೆಂದೂ 

No comments: