Monday 1 February 2016

ನನ್ನೊಡಲಲ್ಲಿ ಉರಿಯುತಿರುವ ನಿರಾಸೆಯ ಬೆಂಕಿ ಆರಲು 
ಕುಡಿಯಬೇಕಾಗಿದೆ ಯಶಸ್ಸಿನ ನೀರನು 
ಆ ನೀರಿಗಾಗಿ  ಸೇರಿಸಬೇಕು ನಾ ಪರಿಶ್ರಮವೆಂಬ ಹನಿಗಳನ್ನು 
ಕಷ್ಟಪಟ್ಟರೆ ತಾನೇ ಸುಖದ ಬಾಗಿಲು ತೆರೆಯುವುದು 
ಮುಚ್ಚಿರುವ ಕದವ ತೆರೆಯಲು ಸುರಿಸಬೇಕು ಬೆವರಿನ ಶ್ರಮವ 
ಅರಿಯಲು ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಿರಿಯರ ನುಡಿಯ 
ಪ್ರಯತ್ನವೆಂಬ ಬತ್ತಿಗೆ ಶ್ರಮವೆಂಬ ಎಣ್ಣೆಯ ಕೂಡಿಸಿ ದೀಪ ಹಚ್ಚುವಾಸೆ 
ಬೆಳಗಲು ಯಶಸ್ಸೆಂಬ ಜ್ಯೋತಿಯ ಇಲ್ಲದೇ ಯಾವುದೇ ದುರಾಸೆ 

1 comment:

Badarinath Palavalli said...

ಸಕಾರಾತ್ಮಕ ಕವನ.