Monday 15 February 2016

ಎಲ್ಲರೂ ನನ್ನವರೇ ಎಂದು ನಂಬಿ ಮೋಸ ಹೋದ ಮನಸೊಂದು 
ಸಾಯಲು ಹೊರಟಿತಂತೆ ಆದರೆ ದೇಹವ ಏನು ಮಾಡುವುದು 
ಜೀವ ತೆಗೆಯುವ ಶಕ್ತಿ ಜೀವ ಕೊಟ್ಟ ದೇವರಿಗೇ ಎಂದು ಅರಿತು 
ಹಿಂದೆ ತಿರುಗಿದರೆ ಮತ್ತೂ ಮೋಸ ಮಾಡಿದವರನ್ನೇ ನೋಡುತಿರಬೇಕು 
ಏನು ಮಾಡಲೂ ಆ ನೊಂದ ಮನಸಿಗೆ ತೋಚದಾಯಿತು 
ಕೊನೆಗೊಂದು ತಿಳಿಯಿತು ಸತ್ಯ ನನ್ನವರೆಲ್ಲರೂ ಮಿಥ್ಯ 
ಇಲ್ಯಾರು ನಿನಗಿಲ್ಲ ನಿನಗೆ ನೀನೆ ಎಲ್ಲ 
ಬಿಟ್ಟು ಬಿಡು ಎಲ್ಲರೂ ನನ್ನವರೆಂಬ ಭ್ರಮೆಯ ಮಾಡಿಬಿಡು ನಿರ್ಲಕ್ಷ 
ಆಗ ಓಡಿ ಬರುವುದು ಛಲವು ನಿನ್ನದಾಗಿಸಲು ಬದುಕಿನ ಗೆಲುವು 

1 comment:

Badarinath Palavalli said...

ಛಲದ ಸೂತ್ರ ಸರಳವಾಗಿ ನಿರೂಪಿಸುತ್ತಿದ್ದೀರ.