Tuesday 17 September 2013

ವಿಷಯದ ಹುಡುಕಾಟ

ಬರೆಯಬೇಕೆಂದು ಪ್ರಯತ್ನಿಸಿದರೂ ಏನೂ 
ತೋಚುತ್ತಿಲ್ಲ ಮನಸಿಗೆ ಇಂದು 
ಏನಾದರೂ ಸರಿಯೇ ಬರೆದೇ ಬಿಡಲು 
ನಿರ್ಧರಿಸುವೆ ನಾ ಈ ಕ್ಷಣ 
ಅಂದುಕೊಂಡ ಪದಗಳೆಲ್ಲೂ ಸಿಗುತ್ತಿಲ್ಲ 
ಆದರೂ ಬರೆಯದೇ ಇರಲು ಮನಸಿಲ್ಲ 

ಒಲವಾಯಿತು ಛಲವಾಯಿತು 
ನಿಸರ್ಗವಾಯಿತು ನೀಹಾರಿಕವಾಯಿತು 
ಸ್ನೇಹವಾಯಿತು ಪ್ರೇಮವಾಯಿತು 
ಮಗುವಾಯಿತು ನಗುವಾಯಿತು 
ಆನಂದ ಭಾಷ್ಪವೂ ಹರಿಯಿತು 
ದುಃಖದ ಕಣ್ಣೀರೂ ಸುರಿಯಿತು 

ನಾ ಬರೆಯಬೇಕೆಂಬ ವಿಷಯಗಳೆಲ್ಲ 
ಸವೆಯುತ್ತಾ ಎಲ್ಲಿಗೆ ಹೋದವೋ ನಾ ಕಾಣೆ 
ಮನದ ಹಂಬಲ ಈಡೆರುವುದೋ ಇಲ್ಲವೋ 
ಅದೇನೇ ಇರಲಿ ಕವನ ಎಂಬ ಕೋಣೆಯೊಳಗೆ 
ಭಾವನೆಯ ಹಾಳೆಗಳು ರಾಶಿ ರಾಶಿ ಬಿದ್ದಿವೆ 
ಅವನ್ನೆಲ್ಲ ಆಯ್ದು ಒಂದು ಸುಂದರ 
ಕವನವ ಬರೆದೇ ತೀರುವೆ ನಾ ಇಂದು

No comments: