Tuesday 31 January 2017

ಕೃಷ್ಣ

ನೀ ಬರುವ ದಾರಿಯ ಕಾಯುತಿದ್ದಳು ಈ ರಾಧೇ 
ಭಾವನೆಗಳ ಸೆಳೆತವ ಸಹಿಸಲಾರದೆ 

ಭಾವನೆಗಳು ಬರಿದಾಗುವ ಮುನ್ನ ನೀ ಕೊಟ್ಟೆ ನವಿಲುಗರಿ 
ಆ ಗರಿಯ ಹಿಡಿದು ಬರೆಯುವಾಸೆ ನಿನ್ನೊಲವಿನ ಹೆಗಲೇರಿ 

ಬಣ್ಣ ಬಣ್ಣದ ಗರಿಯ ನೋಡಿದೆ ಬರೆಯಲು ಚಂದದ ಕವನ 
ಬರೆಯದಂತೆ ತಡೆಯುತಿಹುದು ನಿನ್ನೇ ಆವರಿಸಿರುವ ನನ್ನೀ ಮನ 

ಬರೆಯುವುದ ಬಿಟ್ಟು ಎಣಿಸುತಿರುವೆ ಗರಿಗಳನು 
ಮರೆಯಲು ನೀ ಇರದ ವಿರಹದ ಘಳಿಗೆಗಳನು 

No comments: