Thursday 3 July 2014

ನಾ ಏನು ತಪ್ಪು ಮಾಡಿರುವೆನೋ ಗೊತ್ತಿಲ್ಲ 
ನೋವಿನ ಮಳೆ ಸುರಿಯುವುದು ನಿಲ್ಲುತ್ತಿಲ್ಲ 
ಎಷ್ಟು ಸಮಾಧಾನ ಮಾಡಲಿ ಈ ಹಾಳು ಮನಸಿಗೆ 
ತಾಳ್ಮೆ ಸತ್ತು ಹೋಗಿದೆ ನೊಂದು ನೊಂದು ನನಗೆ 
ಹೃದಯದ ಬಡಿತ ನಿಂತು ಹೋಗಬಾರದೇ ಎನಿಸುತಿದೆ 
ಬೇಡವೆಂದರೂ ಕಹಿ  ನೆನಪುಗಳು ಕಾಡುತಿವೆ 
ಸಾವಾದರೂ ಬಂದರೆ ನೆಮ್ಮದಿ ಸಿಗುವುದೇನೋ 
ನನ್ನಿಂದ ತೊಂದರೆ ಅನುಭವಿಸುತಿರುವ ಮನಕೆ 

1 comment:

Badarinath Palavalli said...

ಬದುಕೇ ಹಾಗೆ ಅದು ಸಿಹಿ - ಕಹಿಗಳ ರಸ ಶಾಲೆ!