Wednesday 25 November 2015

ಹಾರುವ ಹಕ್ಕಿಗೆ ಯಾರ ಹಂಗಿಲ್ಲ ಬೀಸುವ ಗಾಳಿಗೆ ಬೇಲಿಯೂ ಇಲ್ಲ 
ಹರಿವ ನೀರನು ತಡೆಯುವ ಶಕ್ತಿಯು ಇಲ್ಲ 
ಸುಡುವ ಬೆಂಕಿಯ ತಂಪಾಗಿಸುವ ಕಲೆ ಗೊತ್ತಿಲ್ಲ 
ಆದರು ಮನುಜರಾದ ನಮಗೆ ನಂದು ನಂದು 
ಎನ್ನುವ ಅಹಂಕಾರ ಹೋಗುವುದಿಲ್ಲ 
ಸದಾ ಜಾತಿ ಮತ ದ್ವೇಷ ಕ್ರೌರ್ಯ ಅಸಹಿಷ್ಣುತೆ ಎಂದು 
ಕೂಗಾಡುತ್ತಾ ಪ್ರಕೃತಿಯನ್ನು ವಿಕೃತಗೊಳಿಸುತ್ತ 
ಮೂಕಜೀವಿಗಳ ನೆಮ್ಮದಿ ಹಾಳುಮಾಡುತ್ತ ನಿಸರ್ಗವನ್ನು ಕೊಲ್ಲುತ್ತಿದ್ದರೆ 
ಭೂತಾಯಿಯ ಶಾಪಕ್ಕೆ ನಾವೆಲ್ಲ ಬಲಿಯಾಗದೆ ಇರುವುದಿಲ್ಲ 

No comments: