Sunday 8 November 2015

ಮುಂಜಾವು ಇಂದು ಮಂಜಿನಿಂದಲೇ ಕೂಡಿತ್ತು 
ಹಸಿರೆಲೆಯ ಮೇಲೆ ಅರಳಿದ ಹೂಗಳೆಲ್ಲವೂ 
ಅಲಂಕೃತಗೊಂಡಿವೆ ಇಬ್ಬನಿಯ ಹನಿಗಳಿಂದ 
ಭೂದೇವಿಯು ತಂಪಾಗಿದ್ದಳು ವರುಣ ಸುರಿಸಿದ ಹನಿಮಳೆಯಿಂದ 
ಆಹಾ ಬೆಂಗಳೂರು ಸಹ ಮಲೆನಾಡಂತೆ ಕಂಗೊಳಿಸುತಿದೆ ಇಂದು 
ನನ್ನ ಮನವು ಕೂಡ ಇಂದು ತಂಪಾಗಿದೆ 
ಸೊಂಪಾಗಿ ಕವನ ಬರೆಯಲು ಆಸೆ ಚಿಮ್ಮುತಿದೆ 

No comments: