Friday 25 November 2016

ಮೂಕ ಧಾತು




ಕೆ ಎನ್ ಗಣೇಶಯ್ಯನವರ “ಮೂಕ ಧಾತು” ವೈಜ್ನ್ಮ್ಯಾನಿಕ ಅಂಶಗಳಿಂದ ಕೂಡಿದ ಕುತೂಹಲಕಾರಿ ಪುಸ್ತಕ. ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಇವರ ಬರವಣಿಗೆಯಲ್ಲಿ ಹೆಚ್ಚಾಗಿ ಕಾಣುವುದು ಇತಿಹಾಸಕ್ಕೆ ಸ೦ಬ೦ಧಪಟ್ಟ ವಿಷಯಗಳು. ಆದರೆ “ಮೂಕ ಧಾತು”ವಿನಲ್ಲಿ ಇತಿಹಾಸಕ್ಕಿ೦ತ ವಿಜ್ಞಾನಕ್ಕೆ ಹೆಚ್ಚು ಒತ್ತು ಇದೆ. ಮನುಷ್ಯನ ವಿಕಾಸದ ಹಲವು ಮಜಲುಗಳನ್ನು ಹಾಗು ಜೈವಿಕ ತ೦ತ್ರಜ್ಣಾನದಲ್ಲಿನ ಇತ್ತೀಚಿನ ಬೆಳವಣಿಗೆಳನ್ನು ತು೦ಬಾ ಸರಳ ರೀತಿಯಲ್ಲಿ ಹೇಳಿದ್ದಾರೆ.

ವಿಜ್ಞಾನದ ವಿಷಯವಾದರೂ ಓದಲು ತು೦ಬಾ ಕುತೂಹಲಕಾರಿಯಾಗಿದೆ. ಮೊದಲ ಪುಟ ಶುರುವಾದರೆ ಮುಗಿಯುವವರೆಗೆ ಬಿಡಲು ಮನಸಾಗದ ಪುಸ್ತಕವಿದು ಏಕೆಂದರೆ ಅಷ್ಟು ರೋಚಕ ಅಂಶಗಳಿಂದ ಕೂಡಿವೆ. ಇವರ ಬರವಣಿಗೆಯ ಮತ್ತೊ೦ದು ವೈಶಿಷ್ಟ್ಯವೆ೦ದರೆ ಇವರು ಹೇಳುವ ವಿಷಯಕ್ಕೆ ಸ೦ಬ೦ಧಪಟ್ಟ ಮಾಹಿತಿಯನ್ನು(ರೆಫ಼ರೆನ್ಸ್) ಅದೇ ಹಾಳೆಯಲ್ಲಿ ಕೊಟ್ಟಿರುತ್ತಾರೆ. ಇದರಿ೦ದ ಓದುಗರಿಗೆ ಮಾಹಿತಿಯ ಮೂಲಗಳು ಸಹ ತಿಳಿಯುತ್ತವೆ. ಇಲ್ಲಿ ಕಥೆಯ ಎಳೆಯನ್ನು ಹೇಳುವುದು ಕಷ್ಟ ಏಕೆಂದರೆ ವಿಮರ್ಶೆಗಳಲ್ಲಿ ಹೇಳಬಹುದಾದಂತಹ ಕಥೆ ಇಲ್ಲಿಲ್ಲ. ಇದೊಂದು ವೈಜ್ಞಾನಿಕ ಅಂಶಗಳನ್ನೇ ಮೂಲವಾಗಿಟ್ಟುಕೊಂಡು ಕಾದಂಬರಿ. ಜೊತೆಗೆ ಪುಟದಿಂದ ಪುಟಕ್ಕೆ ಕುತೂಹಲವೇ ಓದುಗರನ್ನು ಆಳುವ ಅರಸ.

ಈ ಕಾದಂಬರಿಯಲ್ಲಿ ಮೂರು ವಿಷಯಗಳು ಮುಖಾಮುಖಿಯಾಗಿ ತರಲು ಪ್ರಯತ್ನಿಸುವುದನ್ನು ಓದುಗರು ಗಮನಿಸುತ್ತಾರೆ. ದೇವರು ಧರ್ಮ ಮತ್ತು ವಿಜ್ಞಾನ, ಆಸೆ ಮತ್ತು ನಾಗರಿಕತೆ, ಸ್ವಾರ್ಥ ಮತ್ತು ಜೀವ ಈ ಅಷ್ಟು ವಿಷಯಗಳು ಮಾನವನ ಜೀವಕ್ಕೂ ಜೀವನಕ್ಕೂ ತುಂಬಾ ಅವಶ್ಯಕ ಹಾಗೆ ಮಾನವನ ವಿಕಾಸವಾದಕ್ಕೂ ಹೇಗೆ ಕಾರಣವಾಗಿವೆ ಎನ್ನುವುದು ತುಂಬಾ ನವಿರಾಗಿ ಚಿತ್ರಿಸಿದ್ದಾರೆ. ನಿಜಕ್ಕೂ ಇದು ಸಂಶೋಧನೆ, ಇತಿಹಾಸ, ವಿಜ್ಞಾನ ಮತ್ತು ವಾಸ್ತವ ಎಲ್ಲದರುಗಳ ಮಿಶ್ರಣಗಳ ಅದ್ಭುತ ಕಾದಂಬರಿ.

No comments: