Tuesday 10 July 2012

ಸುಖದುಖದ ನಡುವೆ....

ಮೌನಗೀತೆಯಲ್ಲಿ ಬರೆಯಲು 
ಸಾಧ್ಯವೇ ಮನದ ಮಾತನ್ನು
ಕಣ್ಣಿನ ಹನಿಯಲ್ಲಿ ಹೊರಹಾಕಲು 
ಸಾಧ್ಯವೇ ಹೃದಯದ ನೋವನ್ನು 

ನಿಸರ್ಗದ ಸೌಂದರ್ಯಕ್ಕೆ ಹೋಲಿಸಲು
ಸಾಧ್ಯವೇ ಮನುಜರ ಸೃಷ್ಟಿಯನ್ನು
ಜನನಿಯ ಮಮತೆಗೆ ಸರಿಸಾಟಿಯೇ
ಮಕ್ಕಳು ಕೊಡುವ ಆಸರೆ

ಮುಗಿಲ ಮಲ್ಲಿಗೆಯ ಕಂಡು
ಆಸೆಪಟ್ಟರೆ ಅದು ನಿಲುಕುವುದೇ
ಭೂಮಿಯ ಮೇಲೆ ನಿಂತ ಕೈಗಳಿಗೆ
ಓ ಮನುಜ ನೀನೆಷ್ಟು ಕ್ಷುಲ್ಲಕ ಅಲ್ಲವೇ
ಈ ಪ್ರಕೃತಿಯ ಮುಂದೆ...???

ಓ ನನ್ನ ಜೀವನವೇ
ಎಂದಿಗೆ ದಡ ಸೇರುವೆ ನೀನು
ಸಾಕಲ್ಲವೇ ಈ ಪರದಾಟ
ಎಂದಿಗೆ ಮುಗಿಸುವೆ ನಿನ್ನ ಆಟ..????????

No comments: