Monday, 30 May 2016

ಪ್ರೀತಿಸುವ ಮನಕೆ ಕಾಯುವುದೇ ಕಾಯಕ 
ಕಾಯಿಸುವ ಮನಸಿಗೆ ಆ ಮನಸ ಸೇರುವ ತವಕ 
ರಾಗಕ್ಕೆ ಭಾವವು ಸೇರಿ ಇಂಪಾದ ಸಂಗೀತ ಹರಿವಂತೆ 
ಕಾಯಕಕ್ಕೆ ತವಕ ಸೇರಿದರೆ ಅಂತ್ಯವಾಗುವುದು ವಿರಹ 
ಚಿಲುಮೆಯಂತೆ ಚಿಮ್ಮುವುದು ಪ್ರೇಮ ಬರಹ 

Friday, 27 May 2016

ಪುಸ್ತಕ ವೈಜ್ಞ್ಯಾನಿಕವೋ, ಸಾಮಾಜಿಕವೋ, ಹಾಸ್ಯವೋ, 
ಮನರನಜನೆಯೋ ಮತ್ತೊಂದೋ ಮೊಗದಂದೋ 
ಓದುಗರ ಆಯ್ಕೆ ಯಾವುದೇ ಇರಲಿ ಜ್ಞ್ಯಾನಕ್ಕೆ ಅಂತ್ಯ ಇರದು 
ಪುಸ್ತಕದ ಪುಟಗಳಂತೆ ಮನಸಿನ ಭಾವಗಳು ಬದಲಾಗುವುವು 
ಆ ಭಾವಗಳೆಲ್ಲ ಪುಟಗಳ ಸಾರದಂತೆ ಅನುಭವಿಸಿ ಓದಿದರೆ ಆನಂದ 
ಒತ್ತಾಯದಿಂದ ಓದಿದರೆ ಆಗುವುದು ಸಮಯದ ದಂಡ 
ಪ್ರೀತಿಯಿಂದ ಓದಿದರೆ ಪುಸ್ತಕ ಆಗುವೆ ಜ್ಞ್ಯಾನದ ಅರ್ಚಕ 

Thursday, 26 May 2016


ನಿನ್ನ ನಗುವೆಂಬ ಬೆಳದಿಂಗಳಲಿ ಹರಿದಾಡುವ ಒಲವು 
ನನ್ನ ಕಣ್ಣಿನ ಕಾಂತಿಯ ಸೇರಿದರೆ ಚಿಮ್ಮುವುದು ಕಾರಂಜಿಯು 
ನಿನ್ನ ತುಟಿಯಂಚಲ್ಲಿ ಒಂದು ಕಿರುನಗೆಯ 
ನಾ ಕಂಡರೆ ಸಾಕು ನನ್ನ ಮನಸು ನಲಿಯುವುದು
ಅರಳುತಿರುವ ಹೂವಲ್ಲಿ ಹರಿಯುತಿರುವ ನೀರಲ್ಲಿ 
ನಾ ಕಾಣಲು ಪರಿತಪಿಸುವೆ ಆ ನಿನ್ನ ನಗುವ 
ಇರುಳ ಚಂದ್ರನಲ್ಲೂ  ಕಾಣುತಿದೆ ನಿನ್ನ ಮೊಗವು 
ಆ ಚಂದ್ರನಿಗೂ ಸಾಟಿಯಾಗುತ್ತಿಲ್ಲ ನಿನ್ನ ನಗುವು
ನಾನಿರುವ ಪ್ರತೀಕ್ಷಣ ಬಯಸುವೆ ನಿನ್ನ ಆ ನಗುವ 
ಮರೆಯುವೆ ಅದ ನೋಡುತ ನನ್ನ ಮನದ ಭಾರವ 

Tuesday, 24 May 2016

ಬಂದೇ ಬಿಟ್ಟಿತು ಮತ್ತೊಂದು ಮಂಗಳವಾರ 
ಹೊತ್ತು ಹತ್ತಾರು ಕಾದಂಬರಿಗಳ ಹಾರ 
ಬೇಕಾದ ಕಾದಂಬರಿ ಎಂಬ ಹೂ ಆರಿಸಿ ನೀವೆಲ್ಲ 
ಅದನು ಕಿತ್ತು ನಿಮ್ಮ ಕೈಯಲ್ಲಿಡುವರು 
ಕಾದಂಬರಿ ಕೂಟದ ಮಾಲೀಕರೆಲ್ಲ 
ಹಾರವೆಲ್ಲ ಬಿಡಿ ಬಿಡಿ ಹೂಗಳಾದ ಮೇಲೆ 
ಒಂದೊಂದೇ ದಳವನ್ನು ಸವಿಯಿರಿ ನೀವೆಲ್ಲ 
ಅರ್ಪಿಸುತ್ತಾ ಧನ್ಯವಾದಗಳನು ಕಾದಂಬರಿಗಳಿಗೆಲ್ಲ 

Sunday, 22 May 2016

ಕೈಗೆಟುಕಿದರೆ ಒಂದು ಕಾದಂಬರಿ 
ಪುಟ ತಿರುವಿದರೆ ತೋರುವುದು ನೂರಾರು ಭಾವ ಲಹರಿ 
ಬಿಳಿಯ ಹಾಳೆಗಳಿಗೆ  ಕಪ್ಪು ಶಾಹಿಯ ಬಂಧನ 
ಓದುತ ಹೋದಂತೆ ಮನಸಿಗಾಗುವುದು ರೋಮಾಂಚನ 
ಹಾಳೆ ಬಿಳಿಯಾದರೂ ಶಾಹಿ ಕಪ್ಪಾದರೂ 
ಅದರಲ್ಲಿ ಅಡಗಿವೆ ರಂಗು ರಂಗಿನ ಭಾವನೆಗಳು 
ಅದನೋದುವ ಭಾಗ್ಯವ ಪಡೆದ ನನ್ನ ನಯನ 
ಹೇಳುತಿವೆ ಪುಸ್ತಕಗಳಿಗೆ ಮನದುಂಬಿ ನಮನ 

Friday, 20 May 2016

ನೀ ನಡೆವ ದಾರಿಯಲ್ಲಿ ಹೂನಗೆಯು ಸದಾ ಅರಳಿರಲಿ 
ನೀ ನುಡಿವ ಸ್ವರದಲ್ಲಿ ಸಂಗೀತವು ತುಂಬಿ ಹರಿಯಲಿ 
ಏನೇನೋ ಬಯಸುವ ಮನಸು
ಆಸೆಗಳೆಲ್ಲ ಕೈಗೂಡಿದರೆ ಎಂತಹ ಸೊಗಸು 

ವಿಧಿಯಾಟದ ಬುಟ್ಟಿಯಲ್ಲಿ ಸಿಹಿಯನ್ನು ಹೆಕ್ಕಿ 
ಕಹಿಯನ್ನು ಕುಟ್ಟುವ ಸೌಭಾಗ್ಯ ನನಗಿಲ್ಲ 
ಆಗಿದ್ದು ಆಗಲಿ ಸಿಕಿದ್ದು ಸಿಗಲಿ ನನಗಿಲ್ಲ ರೋದನೆ 
ನೀ ಸನಿಹವಿಲ್ಲ ಎಂಬುದೊಂದೇ ನನ್ನ ವೇದನೆ 

ನಿನ್ನ ಕಣ್ಣ ನೋಟದಲ್ಲಿ ಸದಾ ನನ್ನ ಬಿಂಬ ಕಾಣುತಿರಲಿ 
ನನ್ನ ಬಾಳಿನ ಕೊನೆವರೆಗೂ ನಿನ್ನ ನೆನಪು ಕಾಡುತಿರಲಿ 
ಅಲ್ಲಿಯವರೆಗೂ ನಾ ಬರೆಯುತಿರುವೆ ಒಲವಿನ ಕವನ 
ಅದು ನಿನ್ನ ಮನ ತಟ್ಟಿದರೆ ನನ್ನ ಬದುಕು ಪಾವನ 
ನಾನು ಓದಿದ ಕಾದಂಬರಿಗಳ ಹೆಸರಲ್ಲಿ ಹೆಣೆದಿರುವ ಸಾಲುಗಳು 
#ಕನ್ನಡ_ಕಾದಂಬರಿಗಳ_ಕೂಟ 
"ಡಾಲರ್ ಸೊಸೆಯ" ಕಾಲದಲ್ಲಿ 
"ಚೋಮನ ದುಡಿಯ" ಸೊಬಗನ್ನೇ ಮರೆತು 
"ಯಶಸ್ವಿ"ಯಾಗಿ "ಚಂದ್ರನ ಚೂರ"ನ್ನು ಓದಿದರೂ 
"ಸಿಂಗಾರೆವ್ವ" ನ ಸೌಂದರ್ಯವನ್ನು "ಧರ್ಮರಾಯನ ಸಂಸಾರ"ದಲ್ಲಿ 
ಹುಡುಕುವ ಆಸೆಯೇ "ಚಿಗುರಿದ ಕನಸು"