Tuesday, 17 May 2016

ಕನ್ನಡ ಕಾದಂಬರಿಗಳ ಕೂಟ
ಹಗಲಿರುಳು ಎನ್ನದೇ ಕೊಡುತಿರುವೆ ನೀ ನನಗೆ ಕಾಟ 
ಊಟ ನಿದ್ದೆಗಳ ಮರೆಸಿ ನಿನ್ನಲ್ಲೇ ನನ್ನ ಮನವ ಬೆರೆಸಿ 
ನಿನ್ನ ಬಿಟ್ಟಿರಲಾರದಂಗೆ ಮಾಡಿದೆ ನನ್ನ ನಿನ್ನ ಒಡನಾಟ 
ಹೀಗೆ ಆಡುತಿದ್ದರೆ ನೀ ಇಂತಹ ಆಟ 
ಇಷ್ಟರಲ್ಲೇ ನಿನ್ನ ಸಂಪೂರ್ಣ ಆವರಿಸುವುದು ನನ್ನ ನೋಟ
ಆಗ ಕಿಚಾಯಿಸಿ ನಗುವ ಆಸೆ ನನಗೆ ನೋಡಿ ನಿನ್ನ ಪರದಾಟ 

Monday, 16 May 2016

ಮನವೆಂಬ ತಿಳಿನೀರ ಕೊಳದಲ್ಲಿ 
ಕೋಪ ದ್ವೇಷ  ನೋವು ನಿರಾಸೆ ಎಂಬ ಕಲ್ಲುಗಳ ಎಸೆದರೂ 
ಅವು ಕೊಳದ ತಳದಲ್ಲಿ ಮುಳುಗುವುದೇ ಹೊರತು 
ಪ್ರೀತಿ ಸ್ನೇಹಗಳ ಬೀಜ ಬಿತ್ತಿ ಭರವಸೆಯ ಬೆಳಕಲ್ಲಿ ಹುಟ್ಟಿ 
ಪರಿಶ್ರಮದ ಫಲವಾಗಿ ಅರಳುವ ಕಮಲದಂತೆ 
ಎಂದೂ ಸುಂದರವಾಗಿ ಕಾಣಲಾರದು 
ನಿನ್ನ ಮನವಾಗಿರಲಿ ಎಂದೆಂದೂ ತಿಳಿನೀರ ಕೊಳವಾಗಿ 
ಕಾಪಾಡು ನೀ ಅದನು ಆಗದಂತೆ ಸಾಗರದ ನೀರಾಗಿ 

Sunday, 15 May 2016

ನಿನ್ನ ಪ್ರೀತಿಯ ಪ್ರಮಾಣವ ಪರಾಮರ್ಶಿಸಿ ಪರಿಕಲ್ಪಿಸುವ ಪ್ರತಿಭೆ ನನಗಿಲ್ಲ 
ಕಾರಣ ಅದನು ತಿಳಿಯುವ ಕುತೂಹಲವೂ ಎನಗಿಲ್ಲ 
ನನ್ನ ಮನಸ ಕದ್ದು ನೀ ಕನಸು ಕಾಣುವಾಗ ನಾ ಬಂದು ಬಿಗಿದಪ್ಪಿದಾಗ 
ನಿನ್ನ ಕಂಗಳ ಕಾಂತಿಯಲಿ ಹೊಳೆಯುವ ಒಲವನ್ನು ನೋಡಿದರೆ 
ತಿಳಿಯುವುದು ನೀ ನನ್ನ ಪ್ರೀತಿಸುವ ಪರಿಯೇನು 
ಅದನ್ನು ಅನುಭವಿಸುವ ಪುಣ್ಯ ಪಡೆದ ನನ್ನ ಹಿರಿಮೆಗೆ ಸಾಟಿ ಏನು... ?

Wednesday, 11 May 2016

ನಾ ತಿರುವುತಿದ್ದೆ ಪುಟಗಳನು ಒಂದಾದ ಮೇಲೊಂದರಂತೆ 
ಬಿಚ್ಚಿಡುತ್ತಾ ಹೋಯಿತು ನೂರಾರು ಭಾವಗಳನು ಆ ಪುಸ್ತಕವು 
ಪ್ರತೀ ಪುಟದಲ್ಲಿಯೂ ಬಿಂಬಿತವಾಗಿದೆ ನೋವು ನಲಿವುಗಳ ತಲ್ಲಣ 
ಓದುವ ಪ್ರತೀಕ್ಷಣ ಆಗುವುದು ಮನದಲ್ಲಿ ರೋಮಾಂಚನ 
ಹಸಿವಿನ ಅರಿವಿಲ್ಲ ನಿದ್ದೆಯ ಸುಳಿವಿಲ್ಲ ಪುಸ್ತಕದೇ ರಾಜ್ಯಭಾರ ಮನದಲ್ಲಿ 
ಸಿಲುಕಿರುವೆ ನೈಜ ಜೀವನದ ಚಿತ್ರಿಸುವ ಕಲೆಯ ಸುಳಿಯಲ್ಲಿ 
ಕೊನೆಪುಟವ ಓದಿ ಮುಗಿದಮೇಲೆಯೇ ತೀರಿತು ದಾಹ 
ಏನು ಮೋಡಿ ಮಾಡಿ ಹೋಯಿತೋ ಆ ಪುಸ್ತಕದ ಮೋಹ 

Friday, 6 May 2016

ಏನೆಂದು ಬರೆಯಲಿ ಅಮ್ಮ ನಾ ನಿನಗಾಗಿ 
ಶಾರದಾಂಬೆಯೂ ಕರುಣಿಸರಾಳಲು ನಿನ್ನ ವರ್ಣಿಸುವ ಪದವನ್ನು 
ನೀನಿಲ್ಲದ ನನ್ನ ಬಾಳು ಊಹಿಸಲೂ ಅಸಾಧ್ಯ 
ಎಂತಹ ಕರುಣೆ, ಸಹನೆ ತಾಯಿ ನಿನ್ನದು 
ನಿನ್ನ ಪ್ರೇಮಾಮೃತದಲ್ಲಿ ಮಿಂದು ಬೆಳೆದ ಈ ಮಗಳು 
ಇವತ್ತು ಮಾತ್ರ ತಾಯಂದಿರ ದಿನವೆಂದು ಶುಭಾಷಯ 
ಹೇಳಿದರೆ ನೀ ಕೊಟ್ಟ ಪ್ರೀತಿಗೆ ನಾ ಬೆಲೆ ಕಟ್ಟಲಾದಿತೆ 
ನನ್ನ ಕೊನೆಯುಸಿರು ಇರುವರೆಗೂ ನಾ ಬಯಸುವೆ ನಿನ್ನ ನಗುವ 
ನನ್ನ ಬದುಕಿನ ಕೊನೆದಿನವು  ಬರುವರೆಗೂ ನಾ ಹೇಳುವೆ 
ನಿನಗೆ ತಾಯಂದಿರ ದಿನದ ಶುಭಾಷಯ 

Monday, 2 May 2016

ಮುಗಿಲ ಹೆಗಲ ಹತ್ತಿ ನನ್ನೊಡಲ ಸಂಕಟ ಹೊರಹಾಕಬೇಕೆಂದಿದ್ದೆ 
ಈ ಬಿಸಿಲನು ತಾಳದೇ ಅಂಬರದ ನೇಸರನ ಮುಟ್ಟಿ ಅಳಬೇಕೆಂದಿದ್ದೆ 
ವೈಜ್ಞ್ಯಾನಿಕವಾಗಿ ಸೂರ್ಯ ಇಡೀ ಭೂಗ್ರಹಕ್ಕೆ ಬೆಳಕು ನೀಡುವ ನಕ್ಷತ್ರ 
ವೈದಿಕವಾಗಿ ಅರುಣ ನಾವು ದಿನವೂ ಕೈಮುಗಿವ ದಿನಕರ 
ಆ ಹೊಳೆವ ನಕ್ಷತ್ರನೆಲ್ಲಿ ಈ ಸಾಮಾನ್ಯ ಹುಡುಗಿಯಲ್ಲಿ ...??
ಆದರೂ ಅವನು ದೇವನಲ್ಲವೇ ಈ ಭಕ್ತೆಯ ಕೂಗು ಕೇಳುವುದಿಲ್ಲವೇ.. 
ಕರುಣೆ ತೋರು ಓ ಅರುಣನ್ನ  ಕಳುಹಿಸಿಕೊಡು ಭುವಿಗೆ ಆ ವರುಣನ್ನ 
ನಿನಗಾಗಿ ನೀ ಬದುಕು ಪ್ರತೀಕ್ಷಣ 
ಯಾರಿಲ್ಲ ಇಲ್ಲಿ ನೀಡಲು ನಿನಗೆ ಸಾಂತ್ವನ 

ಎಷ್ಟೆಂದು ನಿರೀಕ್ಷಿಸುವೆ ನಿಷ್ಕಲ್ಮಷ ಪ್ರೀತಿಯ 
ಬದುಕಲು ಕಲಿಯಬೇಕು ಬೇರೆ ರೀತಿಯ 

ಮುಖವಾಡ ತೊಟ್ಟು ಪ್ರೀತಿಸುವ ಸಾರ್ಥಿಗಳೇ ಹೆಚ್ಚು 
ಅದಕ್ಕೆಂದೇ ನೀ ಅವರಿಗೆ ಹಚ್ಚು ಬುದ್ಧಿಯ ಕಿಚ್ಚು 

ಬೇರೆಯವರನು  ನಂಬಿ ಬದುಕದಿರು 
ಆತ್ಮವಿಶ್ವಾಸದ ದಿಟ್ಟ ಹೆಜ್ಜೆಗಳನು ನಿಲ್ಲಿಸದಿರು