Tuesday, 15 September 2015

ಬಾಳಿನ ಹಸಿರೆಲ್ಲ ಕಮರಿ ಹೋದಾಗ 
ಉಸಿರೇ ನೀ ನಿಲ್ಲುವೆ ಯಾವಾಗ 

Tuesday, 8 September 2015

ಕಣ್ಣಿಗೆ ಕಾಣದ ಮನದಲ್ಲಿ ಬಣ್ಣ ಬಣ್ಣದ 
ಭಾವನೆಗಳ ಬಿತ್ತುವ ಪುಣ್ಯಾತ್ಮನ್ಯಾರೋ 
ಅವು ಚಿಗುರಿ ಹೂವಾಗಿ ಅರಳುವ ಸಮಯದಲ್ಲಿ 
ಕಿತ್ತು ಸಾಯಿಸಿಬಿಡು ಎಂದು 
ವಿಧಿಯ ಬರೆದ ಕೈ ಯಾವುದೋ 

Monday, 7 September 2015

ನನ್ನೊಡಲಲ್ಲಿ ತುಂಬಿದೆ ಮಮತೆಯ ಮಂಜು 
ಅದೇಕೋ ಕರಗುತಿದೆ ಕಾರಣ ನಿಮ್ಮೆಲ್ಲರ ಸಂಚು 
ಬೇಡವೆಂದರೂ ನಿಷ್ಕರುಣೆಯಿಂದ ಕೀಳುತ್ತಿರುವಿರಿ 
ನನ್ನ ಕರುಳಿನ ಕುಡಿಗಳ ನಿಮ್ಮ ಜೀವನದ ಆಧಾರವ 
ಅವುಗಳ ಆರ್ತನಾದಗಳೇ ಹೇಳುತ್ತಿವೆ ನಿಮಗಿಲ್ಲ ಇನ್ನು ಮಳೆ ಬೆಳೆಯೂ 
ಆದರೂ ಬಾರದು ಬುದ್ಧಿಯೂ ಬರೀ ಬರಗಾಲವೇ ನಿಮಗೆ ಸಿದ್ಧಿಯೂ 
ನನ್ನ ಕರುಣೆ ಸಹನೆಯೂ ಕರಗುತ್ತಿವೆ ನಿಮ್ಮ ನೋವುಗಳು ಹೆಚ್ಚುತ್ತಿವೆ 
ಕೊಂದರೆ ನೀವು ಭೂತಾಯಿಯ ಹತ್ತುವಿರಿ ನರಕದ ಮೆಟ್ಟಿಲುಗಳ 

Friday, 4 September 2015

ನಿನ್ನ ಕಣ್ಣೀರು ಜಾರುವ ಮುನ್ನ 
ಬರುವುದು ಒ0ದು ಚಿನ್ನ 
ಬಿಗಿಯಾಗಿ ಹಿಡಿದಪ್ಪಲು ನಿನ್ನ 
ಜಾರದ0ತೆ ನೋಡಿಕೊಳ್ಳುವುದು 

ನಿನ್ನ ಕ0ಬನಿಯನ್ನ...

Thursday, 27 August 2015

ನನ್ನ ಮನಸೊಂದು ತಿಳಿನೀರ ಕೊಳವು 
ಅಲ್ಲಿ ಹರಿಯುತ್ತಿದೆ ಪರಿಶುದ್ಧ ಪ್ರೇಮವೂ 
ಬಯಸುತಿದೆ ನಿನ್ನ ಮನಸಿನ ಸಂಗಮವೂ 
ಕೊಳದಲ್ಲಿ ಚಂದ್ರನ ಬಿಂಬವ ಕಾಣಲು 
ನೈದಿಲೆಯ ನಯನವು ಪರಿತಪಿಸುವ ಹಾಗೇ 
ನನ್ನ ಪ್ರೀತಿಯ ಬಳ್ಳಿಗೆ ನಿನ್ನ ಮನಸಿನ 
ಸಂಗಮವೇ ಆಸರೆಯೆಂದು ಕಾಯುತಿರುವೆ 


Thursday, 6 August 2015

ರೈತನಿಗೂ ಸಾಕಾಗಿದೆ ಬರಗಾಲದ ನೋವು 
ಬೆಳೆಗಳಿಗೆಲ್ಲ ತಾಕುತ್ತಿದೆ ಬಿಸಿಲಿನ ಖಾವು 
ಬೇಕಾಗಿದೆ ನಮಗೆಲ್ಲ ವರುಣನ  ಕರುಣೆಯು 
ಭೂತಾಯಿಯ ಕರುಳ ತಂಪಾಗಿಸಲು 
ಓ ಮಳೆರಾಯ ನಿನಗೊಂದು ಪ್ರಾರ್ಥನೆ 
ನಿನ್ನ ಕೋಪದಿಂದ ಸುಡಬೇಡ ನಮ್ಮ ರೈತರ ಬೆಳೆ 
ಅತೀಯಾಗಿಯೂ ಸುರಿಯದೇ ಬರಿಯ ಹನಿಗಳನ್ನೂ ಉದುರಿಸದೆ 
ಮಿತವಾಗಿ ಸುರಿದು ಬದುಕಿಸು ಬೆಳೆಯ ಚಿಗುರ 
ಪ್ರೀತಿ ಕರುಣೆ ವಾತ್ಸಲ್ಯದಿಂದ ವರೆಸು ರೈತರ ಕಣ್ಣೀರ 

Monday, 3 August 2015

ಮಾತಾಡದ ಮೌನಕ್ಕೆ ಇಂದೇಕೋ ಶರಣಾಗಿರುವೆ 
ಸಿಗಲಾರದ ಶಬ್ಧಕ್ಕೆ ಹುಡುಕಾಡಿ ಸೋತಿರುವೆ 
ನೂರಾರು ಭಾವಗಳ ಪೋಣಿಸುವ ಆಸೆಯ ಕೊಂದಿರುವೆ 
ಮೌನವು ಮಾತಾಗಿ ಭಾವಗಳೆಲ್ಲ ಪದಗಳಾಗಿ 
ಹೊರಹೊಮ್ಮುವ ತನಕ ಕೊನೆವರೆಗೂ ಕಾಯುವೆ